ಉತ್ಕಟ ಪ್ರೀತಿಯಲ್ಲಿ ಪ್ರಜ್ವಲ್ 'ದಿಲ್ ಕಾ ರಾಜಾ'
Page 1 of 1
ಉತ್ಕಟ ಪ್ರೀತಿಯಲ್ಲಿ ಪ್ರಜ್ವಲ್ 'ದಿಲ್ ಕಾ ರಾಜಾ'
ಉತ್ಕಟ ಪ್ರೀತಿಯಲ್ಲಿ ಪ್ರಜ್ವಲ್ 'ದಿಲ್ ಕಾ ರಾಜಾ'
ಮೊದಲ ಸಿನಿಮಾ 'ಸಿಕ್ಸರ್' ಬಿಟ್ಟರೆ ಬೇರೆ ಯಾವುದೂ ನೆಟ್ಟಗೆ ಬಾಕ್ಸಾಫೀಸಿನಲ್ಲಿ ನಿಂತಿಲ್ಲ. ಆದರೂ ಪ್ರಜ್ವಲ್ ದೇವರಾಜ್ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಈಗ ಅವರ ಒಂದಷ್ಟು ಚಿತ್ರಗಳ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ. ಅದೇ 'ದಿಲ್ ಕಾ ರಾಜಾ'!
'ದಿಲ್ ಕಾ ರಾಜಾ' - ಹೆಸರೇನೋ ವಿಶಿಷ್ಟವಾಗಿದೆ. ಅದರಂತೆ ಇದರ ನಿರ್ದೇಶಕ ಸೋಮನಾಥ್ ಪಿ. ಪಾಟೀಲ್ ಅವರದ್ದೂ ವಿಶಿಷ್ಟ ಹಾದಿ. ಗುಲ್ಬರ್ಗಾದಲ್ಲಿ ಇಂಜಿನಿಯರಿಂಗ್ ಮುಗಿಸಿದವರು ಸಿನಿಮಾ ಹಾದಿಯಲ್ಲಿ ದೊಡ್ಡ ಸಾಧನೆಯ ಕನಸುಗಳೊಂದಿಗೆ ಸಾಗುತ್ತಿದ್ದಾರೆ.
ಅದರಲ್ಲೂ ಸೋಮನಾಥ್ ನಿರ್ದೇಶನದ ಮೊದಲ ಚಿತ್ರವನ್ನೇ ಅವರ ಹೆತ್ತವರು ನಿರ್ಮಿಸುವ ಧೈರ್ಯ ಮಾಡಿರುವುದು ವಿಶೇಷ. ನಿವೃತ್ತ ಶಿಕ್ಷಕಿ ತಾಯಿ ಸುಶೀಲಾ ಪಾಟೀಲ್ ಮತ್ತು ಉದ್ಯಮಿ ತಂದೆ ಭರತ್ ರೆಡ್ಡಿ ಪಾಟೀಲ್ ಇದರ ನಿರ್ಮಾಪಕರು. ಮಗನ ಮೇಲಿನ ಭರವಸೆಯ ಸೆಂಟಿಮೆಂಟ್ ಪತ್ರಿಕಾಗೋಷ್ಠಿಯಲ್ಲೂ ಗಾಢವಾಗಿ ಕಂಡು ಬಂತು.
ಇದೇ ತಿಂಗಳ 18ರಂದು ಮುಹೂರ್ತ. ನಂತರ ಬೆಂಗಳೂರು, ಕೋಲಾರ, ಅನಂತಪುರದಲ್ಲಿ ಚಿತ್ರೀಕರಣ.
ಇನ್ನು ಚಿತ್ರದ ಕಥೆ ಶೀರ್ಷಿಕೆಯನ್ನು ನೋಡಿದಾಗಲೇ ಗೊತ್ತಾಗುತ್ತದೆ. ಪಕ್ಕಾ ಯೂತ್ ಲವ್ ಸ್ಟೋರಿ, ಜತೆಗೆ ಆಕ್ಷನ್, ರುಚಿಗೆ ತಕ್ಕಷ್ಟು ಸೆಂಟಿಮೆಂಟ್. ನಾಯಕ ಇಲ್ಲಿ ಪರಮ ಪರೋಪಕಾರಿ. ಮಾನವೀಯತೆಯೇ ಧರ್ಮ ಎಂದು ನಂಬಿದವನು ಎಂದರು ನಿರ್ದೇಶಕರು.
ಐದಕ್ಕೂ ಹೆಚ್ಚು ತೆಲುಗು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಸೋಮನಾಥ್ರದ್ದು. ಇದನ್ನು ಹತ್ತಿರದಿಂದ ನೋಡಿದವರು 'ಗಬ್ಬರ್ ಸಿಂಗ್' ನಿರ್ದೇಶಕ ಹರೀಶ್ ಶಂಕರ್. ಪ್ರೀತಿ-ಪ್ರೇಮದ ದೃಶ್ಯಗಳನ್ನು ಅದ್ಭುತವಾಗಿ ಬರೆಯುತ್ತಾರೆ, ಖಂಡಿತಾ 'ದಿಲ್ ಕಾ ರಾಜಾ' ಕೂಡ ಚೆನ್ನಾಗಿರುತ್ತದೆ ಎಂದು ಆತ್ಮೀಯ ಗೆಳೆಯನ ಬಗ್ಗೆ ಮೆಚ್ಚುಗೆ ಜತೆ ಹಾರೈಕೆಯನ್ನೂ ಹರಿಯ ಬಿಟ್ಟರು.
ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ, ಅಜಯ್ ವಿನ್ಸೆಂಟ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಲಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೆ ನಾಯಕಿ ಯಾರು ಎಂಬ ಪ್ರಶ್ನೆ. ಇದುವರೆಗೆ ಯಾರೆನ್ನುವುದು ಅಂತಿಮವಾಗಿಲ್ಲ. ಕೆಲವೇ ದಿನಗಳಲ್ಲಿ ಆಯ್ಕೆ ನಡೆಯಲಿದೆ ಎಂದರು ನಿರ್ದೇಶಕರು.
'ದಿಲ್ ಕಾ ರಾಜಾ' - ಹೆಸರೇನೋ ವಿಶಿಷ್ಟವಾಗಿದೆ. ಅದರಂತೆ ಇದರ ನಿರ್ದೇಶಕ ಸೋಮನಾಥ್ ಪಿ. ಪಾಟೀಲ್ ಅವರದ್ದೂ ವಿಶಿಷ್ಟ ಹಾದಿ. ಗುಲ್ಬರ್ಗಾದಲ್ಲಿ ಇಂಜಿನಿಯರಿಂಗ್ ಮುಗಿಸಿದವರು ಸಿನಿಮಾ ಹಾದಿಯಲ್ಲಿ ದೊಡ್ಡ ಸಾಧನೆಯ ಕನಸುಗಳೊಂದಿಗೆ ಸಾಗುತ್ತಿದ್ದಾರೆ.
ಅದರಲ್ಲೂ ಸೋಮನಾಥ್ ನಿರ್ದೇಶನದ ಮೊದಲ ಚಿತ್ರವನ್ನೇ ಅವರ ಹೆತ್ತವರು ನಿರ್ಮಿಸುವ ಧೈರ್ಯ ಮಾಡಿರುವುದು ವಿಶೇಷ. ನಿವೃತ್ತ ಶಿಕ್ಷಕಿ ತಾಯಿ ಸುಶೀಲಾ ಪಾಟೀಲ್ ಮತ್ತು ಉದ್ಯಮಿ ತಂದೆ ಭರತ್ ರೆಡ್ಡಿ ಪಾಟೀಲ್ ಇದರ ನಿರ್ಮಾಪಕರು. ಮಗನ ಮೇಲಿನ ಭರವಸೆಯ ಸೆಂಟಿಮೆಂಟ್ ಪತ್ರಿಕಾಗೋಷ್ಠಿಯಲ್ಲೂ ಗಾಢವಾಗಿ ಕಂಡು ಬಂತು.
ಇದೇ ತಿಂಗಳ 18ರಂದು ಮುಹೂರ್ತ. ನಂತರ ಬೆಂಗಳೂರು, ಕೋಲಾರ, ಅನಂತಪುರದಲ್ಲಿ ಚಿತ್ರೀಕರಣ.
ಇನ್ನು ಚಿತ್ರದ ಕಥೆ ಶೀರ್ಷಿಕೆಯನ್ನು ನೋಡಿದಾಗಲೇ ಗೊತ್ತಾಗುತ್ತದೆ. ಪಕ್ಕಾ ಯೂತ್ ಲವ್ ಸ್ಟೋರಿ, ಜತೆಗೆ ಆಕ್ಷನ್, ರುಚಿಗೆ ತಕ್ಕಷ್ಟು ಸೆಂಟಿಮೆಂಟ್. ನಾಯಕ ಇಲ್ಲಿ ಪರಮ ಪರೋಪಕಾರಿ. ಮಾನವೀಯತೆಯೇ ಧರ್ಮ ಎಂದು ನಂಬಿದವನು ಎಂದರು ನಿರ್ದೇಶಕರು.
ಐದಕ್ಕೂ ಹೆಚ್ಚು ತೆಲುಗು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಸೋಮನಾಥ್ರದ್ದು. ಇದನ್ನು ಹತ್ತಿರದಿಂದ ನೋಡಿದವರು 'ಗಬ್ಬರ್ ಸಿಂಗ್' ನಿರ್ದೇಶಕ ಹರೀಶ್ ಶಂಕರ್. ಪ್ರೀತಿ-ಪ್ರೇಮದ ದೃಶ್ಯಗಳನ್ನು ಅದ್ಭುತವಾಗಿ ಬರೆಯುತ್ತಾರೆ, ಖಂಡಿತಾ 'ದಿಲ್ ಕಾ ರಾಜಾ' ಕೂಡ ಚೆನ್ನಾಗಿರುತ್ತದೆ ಎಂದು ಆತ್ಮೀಯ ಗೆಳೆಯನ ಬಗ್ಗೆ ಮೆಚ್ಚುಗೆ ಜತೆ ಹಾರೈಕೆಯನ್ನೂ ಹರಿಯ ಬಿಟ್ಟರು.
ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ, ಅಜಯ್ ವಿನ್ಸೆಂಟ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಲಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೆ ನಾಯಕಿ ಯಾರು ಎಂಬ ಪ್ರಶ್ನೆ. ಇದುವರೆಗೆ ಯಾರೆನ್ನುವುದು ಅಂತಿಮವಾಗಿಲ್ಲ. ಕೆಲವೇ ದಿನಗಳಲ್ಲಿ ಆಯ್ಕೆ ನಡೆಯಲಿದೆ ಎಂದರು ನಿರ್ದೇಶಕರು.
Page 1 of 1
Permissions in this forum:
You cannot reply to topics in this forum
|
|